tag:blogger.com,1999:blog-85870913700109381482024-02-08T09:21:23.301-06:00ಸಮಶೀತೋಷ್ಣಗುರುಪ್ರಸಾದ್ ಕಾಗಿನೆಲೆhttp://www.blogger.com/profile/09170176987375124115noreply@blogger.comBlogger27125tag:blogger.com,1999:blog-8587091370010938148.post-31334142397264887212010-03-12T13:51:00.000-06:002010-03-12T13:53:37.374-06:00ನಿಮ್ಮೊಳಗಿದ್ದೂ ನಿಮ್ಮಂತಾಗದೇಕೆಲವು ದಿನಗಳ ಹಿಂದೆ ಗೆಳತಿಯೊಬ್ಬಾಕೆ ಕರ್ನಾಟಕದ ಒಂದು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರೊಬ್ಬರಿಗೆ ‘ಕನ್ನಡಸಾಹಿತ್ಯಕ್ಕೆ ಅಮೆರಿಕನ್ನಡಿಗರ ಕೊಡುಗೆ’ ಎನ್ನುವ ವಿಷಯದ ಬಗ್ಗೆ ಒಂದು ಮಹಾಪ್ರಬಂಧವನ್ನು ಬರೆದು ಪಿ ಎಚ್ ಡಿ ಗೆ ಪ್ರಯತ್ನ ಮಾಡಬೇಕೆಂದಿದ್ದೇನೆ. ನನಗೆ ಅಡ್ವೈಸರ್ ಆಗಲು ಸಾಧ್ಯವಾ? ಎಂದು ಕೇಳಿದಾಗ ಆತ ಸುಮ್ಮನೆ ನಕ್ಕು ‘ಕಾಗೆ, ಗುಬ್ಬಿಗಳ ಮೇಲೆ ಪಿ ಎಚ್ ಡಿ ಮಾಡಲಿಕ್ಕಾಗುತ್ತದೇನಮ್ಮಾ?’ ಎಂದರಂತೆ. ಖಿನ್ನಳಾಗಿ ಹೇಳಿಕೊಂಡಳಾಕೆ. ತಾನು ಬಹಳ ವಿಷಯಗಳನ್ನೂ ಮತ್ತು ಅಂಕಿ ಅಂಶಗಳನ್ನೂ ಗುರುಪ್ರಸಾದ್ ಕಾಗಿನೆಲೆhttp://www.blogger.com/profile/09170176987375124115noreply@blogger.com5tag:blogger.com,1999:blog-8587091370010938148.post-39203368462562600102010-02-22T14:22:00.000-06:002010-02-22T14:23:07.570-06:00ಮಾಸ್ತಿ ಎಂಬ ಕೆಟಲಿಸ್ಟ್.ಮಾಸ್ತಿಯವರ ಕಥಾಸಾಹಿತ್ಯ ನನಗೆ ಮತ್ತು ನನ್ನ ಪೀಳಿಗೆಯವರಿಗೆ ಎಷ್ಟು ಸಂಗತವಾಗುತ್ತದೆ ಎನ್ನುವುದನ್ನು ಅರ್ಥೈಸುವುದು ಅಷ್ಟು ಸುಲಭದ ಕೆಲಸವಲ್ಲ. ಮೌಖಿಕ-ಶ್ರವ್ಯ ಪರಂಪರೆಯ ಕಥನಕ್ರಮ ಎಂದು ಲಿಖಿತ ಕ್ರಿಯೆಯಾಯಿತೋ ಅಲ್ಲಿಗೆ ಮಾಸ್ತಿ ಪರಂಪರೆ ಬೇರೆ ಒಂದು ಮಗ್ಗುಲನ್ನು ಪಡೆದುಕೊಂಡಿತು ಎಂದು ನನಗನಿಸುತ್ತದೆ. ವೈಶಂಪಾಯನನು ಜನಮೇಜನರಾಯನಿಗೆ ಹೇಳಿರಲಿ, ಟಾಂಗಾ ಹುಸೇನ್ ಸಾಬಿ ಮಾಸ್ತಿಯವರಿಗೆ ನಲವತ್ತೈದು ವರ್ಷದ ಹಿಂದೆ ಹೇಳಿದ ಕಥೆಯಿರಲಿ, ಸೌದೆ ಅಂಗಡಿ ಸುಬ್ಬಯ್ಯನವರಾಗಲೀ ಅಥವಾ ಅವರ ಮಿತ್ರ ಗುರುಪ್ರಸಾದ್ ಕಾಗಿನೆಲೆhttp://www.blogger.com/profile/09170176987375124115noreply@blogger.com2tag:blogger.com,1999:blog-8587091370010938148.post-50775278641405974912010-02-09T19:04:00.000-06:002010-02-09T19:05:31.061-06:00ಇಲ್ಲಿ ಸಾವಧಾನವೂ ಅವಸರವೇಶಾಂತಿನಾಥ ದೇಸಾಯಿಯವರು ತಮ್ಮ ಕೊನೆಯ ಕಾದಂಬರಿ ‘ಓಂ ಣಮೋ’ ವನ್ನು ಮೂಗಿನ ನಾಳದಲ್ಲಿ ಆಕ್ಸಿಜನನ್ನು ಇಟ್ತುಕೊಂಡೇ ಬರೆದರಂತೆ. ಅನೇಕ ವರ್ಷಗಳೇ ಬರೆದರೂ ಕೊನೆಯ ಪರಿಜನ್ನು ಪೂರಕ್ಕೆ ಪೂರ ಯಾವಾಗ ಏನಾಗಿಬಿಡುತ್ತದೆಯೋ ಎಂಬ ಅನಿಶ್ಚತತೆಯಲ್ಲಿಯೇ ಬರೆಯಬೇಕಾಗಿ ಬಂತಂತೆ. ಹಾಗೆಯೇ ಎ ಎನ್ ಮೂರ್ತಿರಾಯರು ಚಿಕ್ಕಂದಿನಲ್ಲಿದ್ದಾಗ ಯಾವುದಾದರೂ ಪುಸ್ತಕ ದೊರೆತರೆ ಪುಸ್ತಕ ಓದಿ ಮುಗಿಸುವ ತನಕ ಸಮಾಧನವಿರುತ್ತಿರಲಿಲ್ಲವಂತೆ. ಕಾರಣ ಆ ಪುಸ್ತಕ ಇನ್ನೊಮ್ಮೆ ಸಿಗುವುದಿಲ್ಲವೆಂಬ ಹೆದರಿಕೆ. ಪುಸ್ತಕವನ್ನು ದುಡ್ಡು ಗುರುಪ್ರಸಾದ್ ಕಾಗಿನೆಲೆhttp://www.blogger.com/profile/09170176987375124115noreply@blogger.com2tag:blogger.com,1999:blog-8587091370010938148.post-41979121658722621532010-01-29T21:38:00.003-06:002010-01-29T21:43:13.061-06:00ಫೈನಲ್ ಕಟ್ಅರವಿಂದ ಅಡಿಗ ‘ದ ವೈಟ್ ಟೈಗರ್’ ಬರೆದು ಸುಮಾರು ದಿನ ಅದನ್ನು ಪ್ರಕಟಮಾಡುವ ಉದ್ದೇಶವನ್ನೆ ಹೊಂದಿರಲಿಲ್ಲ. ನಂತರ ಅದನ್ನು ಮತ್ತೆ ಪರಿಷ್ಕರಿಸಿ ರೆದಾದ ಮೇಲೆ ಅದನ್ನು ತನ್ನ ಏಜೆಂಟಿಗೆ ಕಳಿಸಿದಾಗ ಆ ಏಜೆಂಟು ಅದನ್ನು ಓದಿದ ನಂತರ ಸಂಪಾದಕ ಮಂಡಳಿಗೆ ಕೊಟ್ಟ. ಅದನ್ನು ಓದಿದ ಸಂಪಾದಕರೊಬ್ಬರು ಇಡೀ ಕಾದಂಬರಿಯನ್ನು ಉತ್ತಮ ಪುರುಷದಲ್ಲಿ ಬರೆದುಕೊಟ್ಟರೆ ಇದನ್ನು ಪ್ರಕಟಿಸುವ ಸಾಧ್ಯತೆಯಿದೆ ಎಂದಿದ್ದರು. ಕಾದಂಬರಿ ಪ್ರಕಟಣೆಯಾಗಲು ಬೇರೆ ದಾರಿಯೇ ಇವೆಂದು ಗೊತ್ತಾದ ಮೇಲೆ ಅಡಿಗ ಕಾದಂಬರಿಯನ್ನು ಕೇವಲ ಒಂದು ಗುರುಪ್ರಸಾದ್ ಕಾಗಿನೆಲೆhttp://www.blogger.com/profile/09170176987375124115noreply@blogger.com2tag:blogger.com,1999:blog-8587091370010938148.post-23168618627232982502010-01-10T08:43:00.000-06:002010-01-10T08:48:04.179-06:00ಸ್ವಪ್ನ ಸಾರಸ್ವತಒಬ್ಬ ಬರಹಗಾರ ಒಂದು ಚರಿತ್ರೆಯನ್ನು ಕಲ್ಪಿತ ಬರಹಕ್ಕೆ ಅದರಲಿಯೂ ಕಾದಂಬರಿಯಂತಹ ಪ್ರಕಾರಕ್ಕೆ ಹೇಗೆ ಉಪಯೋಗಿಸಿಕೊಳ್ಳಬಲ್ಲ? ಅದೂ ನಾನೂರು ವರ್ಷಗಳಿಗೂ ಮೀರಿದ ಒಂದು ಸಮುದಾಯದ ಚರಿತ್ರೆಯನ್ನು ಅಧ್ಯಯನ ಮಾಡಿ ಅದನ್ನು ಆಧರಿಸಿ ಕಾದಂಬರಿ ಬರೆದಾಗ ಅದರಿಂದ ನಾವು ಏನನ್ನು ನಿರೀಕ್ಷಿಸಬಹುದು? ಕಾದಂಬರಿಕಾರನ ಸವಾಲುಗಳೇನು? ಬರೇ ಕಾಲಘಟ್ಟದ ಪಲ್ಲಟವನ್ನು ಸೆರೆಹಿಡಿಯುವುದೇ ಇಲ್ಲಿ ಮುಖ್ಯವಾಗುತ್ತದೆಯೇ? ಲೇಖಕ ಚರಿತ್ರೆಗೆ ಎಷ್ಟು ನಿಷ್ಟನಾಗಬಲ್ಲ? ಬರೇ ಶಾಸನಗಳಿಂದ ಅಥವಾ ಯಾರೋ ಚರಿತ್ರಕಾರರು ಬರೆದ ಗುರುಪ್ರಸಾದ್ ಕಾಗಿನೆಲೆhttp://www.blogger.com/profile/09170176987375124115noreply@blogger.com1tag:blogger.com,1999:blog-8587091370010938148.post-7532488903812026052010-01-02T12:26:00.001-06:002010-01-02T12:29:14.375-06:00ವರ್ಧನಾ.. ವಿಷ್ಣುವರ್ಧನಾ..ಗುರುಪ್ರಸಾದ್ ಕಾಗಿನೆಲೆhttp://www.blogger.com/profile/09170176987375124115noreply@blogger.com0tag:blogger.com,1999:blog-8587091370010938148.post-91176460460974647352010-01-02T12:20:00.001-06:002010-01-02T12:33:06.035-06:00ಕವಬಾಟನ ‘ಸಾವಿರ ಪಕ್ಷಿಗಳು’ಯಸುನಾರಿ ಕವಬಾಟ- ಜಪಾನೀ ಸಾಹಿತ್ಯದಲ್ಲಿ ಅತಿ ವಿಶಿಷ್ಟವಾದ ಧ್ವನಿ. ಮೊಟ್ಟ ಮೊದಲ ಬಾರಿಗೆ ಜಪಾನಿನ ಸಾಹಿತ್ಯಕ್ಕೆ ನೊಬೆಲ್ ಪ್ರಶಸ್ತಿಯನ್ನು ತಂದುಕೊಟ್ಟ ಹೆಗ್ಗಳಿಕೆ ಈತನದು. ತನ್ನ ಸರಳವಾದ ಗದ್ಯದಿಂದಲೇ ಮಹತ್ತರವಾದ, ಜೀವನದ ಅನೇಕ ಸಂಕೀರ್ಣಗಳ ಅರ್ಥವನ್ನು ಹುಡುಕಹೊರಟು ಅದರಲ್ಲಿ ಯಶಸ್ಸನ್ನು ಪಡೆದಾತ. ಭಾಷೆ ಸರಳವಾಗುತ್ತಾ ಹೋದಲ್ಲಿ ಅಪ್ರಯತ್ನಪೂರ್ವಕವಾಗಿ ಹೇಳುವ ಕಥನವೂ, ಆಯ್ದುಕೊಳ್ಳುವ ವಿಷಯಗಳೂ ಸರಳವಾಗುತ್ತವೆ ಎಂಬ ನಂಬಿಕೆಗೆ ತದ್ವಿರುದ್ಧವಾದ ಚಿಂತನಕ್ರಮ ಈತನದು. ಭಾಷೆಯನ್ನು ಮೇಣದಂತೆ ಗುರುಪ್ರಸಾದ್ ಕಾಗಿನೆಲೆhttp://www.blogger.com/profile/09170176987375124115noreply@blogger.com5tag:blogger.com,1999:blog-8587091370010938148.post-68983141360870706972009-11-27T16:22:00.000-06:002009-11-27T16:23:45.467-06:00ಬಿದ್ದು ಹೋಗುವ ಮಾತು.ನನ್ನ ವೃತ್ತಿಯಲ್ಲಿ ಕೆಲವುಬಾರಿ ಇದಕ್ಕೆ ‘ಕರ್ಬ್ ಸೈಡಿಂಗ್’ಎನ್ನುತ್ತೇವೆ. ಒಂದು ಸಣ್ಣ ಉದಾಹರಣೆ ಕೊಡುತ್ತೇನೆ-ಒಬ್ಬಾತ ಬಿದ್ದು ಹಿಮ್ಮಡಿ ನೋವುಮಾಡಿಕೊಂಡು ಬಂದಿದ್ದಾನೆ, ಆತನಿಗೆ ಎಕ್ಸ್ರೇ ಮಾಡಿರುತ್ತೇನೆ ಎಂದುಕೊಳ್ಳಿ. ಅಮೆರಿಕಾದ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಗಳಲ್ಲಿ ಕೆಲಸ ಮಾಡುವ ಡಾಕ್ಟರುಗಳಿಗೆ ಒಂದು ವಿಚಿತ್ರವಾದ ಸಮಸ್ಯೆಯಿದೆ. ಅದೆಂದರೆ, ಎಲ್ಲ ಬಲ್ಲವರಾಗಿರಬೇಕು, ಜೀವ ಉಳಿಸುವಷ್ಟು, ನೋವು ಶಮನ ಮಾಡುವಷ್ಟು, ಯಾವುದೇ ಶಾಶ್ವತ ಹಾನಿಯಾಗದೇ ಇರುವ ಹಾಗೆ ಕಾಯುವಷ್ಟು. ಅಂದರೆ, ಗುರುಪ್ರಸಾದ್ ಕಾಗಿನೆಲೆhttp://www.blogger.com/profile/09170176987375124115noreply@blogger.com2tag:blogger.com,1999:blog-8587091370010938148.post-25699406250677953422009-11-13T16:18:00.001-06:002009-11-13T16:19:46.635-06:00ಐ ಲವ್ ಯು, ಮ್ಯಾನ್ಕೆಲವು ದಿನಗಳ ಹಿಂದೆ ವಿಮಾನದಲ್ಲಿ ಪ್ರಯಾಣಮಾಡುತ್ತಿದ್ದಾಗ ಒಂದು ಸಿನೆಮಾ ನೋಡಿದೆ. ಹೆಸರು ‘ಐ ಲವ್ ಯು, ಮ್ಯಾನ್.’ ಹಾಲಿವುಡ್ಡಿನ ರೊಮ್ಯಾಂಟಿಕ್ ಕಾಮಿಡಿಯೆಂದು ಕರೆಸಿಕೊಳ್ಳುವ ಈ ಸಿನೆಮಾದ ಪಾತ್ರಗಳು, ಅವುಗಳ ನಟನೆ ಮತ್ತು ಇಡೀ ಚಿತ್ರದ ಪ್ಲಾಟ್ ಕೂಡ ಬರೇ ಹಸಿಹಸಿಯಾಗಿತ್ತೆಂದು ಹೇಳಿ ಆ ಚಿತ್ರವನ್ನು ಬದಿಗಿಡಬಹುದಾಗಿತ್ತು. ಆದರೆ, ನಾಗರಿಕತೆಯ ಹೊಡೆತಕ್ಕೆ ಸಿಕ್ಕಿ ಗೊಂದಲದ ಗೂಡಾಗಿರುವ ನಮ್ಮ ಸಂಬಂಧಗಳ ಮತ್ತೊಂದು ಆಯಾಮವನ್ನು ಇಂಥ ಬಿ ಗ್ರೇಡ್ ಹಾಲಿವುಡ್ ಚಿತ್ರವೂ ಹೇಗೆ ಒರೆಗೆ ಹಚ್ಚುತ್ತದೆ ಗುರುಪ್ರಸಾದ್ ಕಾಗಿನೆಲೆhttp://www.blogger.com/profile/09170176987375124115noreply@blogger.com3tag:blogger.com,1999:blog-8587091370010938148.post-1423927019205867142009-10-31T16:34:00.002-05:002009-10-31T16:38:11.840-05:00ಹಸ್ತಪ್ರತಿ ಓದುವ ಕಷ್ಟ.ನಿನ್ನ ಫ.ಂಗ್ ಸ್ಕ್ರಿಪ್ಟನ್ನು ನಾನು ಓದೊಲ್ಲ.ಸಿಂಪಲ್ಲಾಗಿ ಹೇಳ್ತಿದೀನಿ. ನಿನ್ನ ಫ..ಂಗ್ ಕತೇನ ನಾ ಓದೊಲ್ಲ. ಅರ್ಥ ಆಗ್ತಾ ಇದೇ ತಾನೇ? ತಪ್ಪು ತಿಳೀಬೇಡ. ಇದನ್ನು ಪರ್ಸನಲ್ ಆಗಿ ತಗೋಬೇಡ. ಇದು ಅನ್ಯಾಯ ಅಂತ ಅನ್ನಿಸ್ತಾ ಇದೆಯಾ? ನಿನ್ನ ಕತೆ ಓದಿ ನನ್ನ ಅಭಿಪ್ರಾಯಾ ಹೇಳಿದರೆ ಬದಲಿಗೆ ಏನು ಮಾಡ್ತೀಯಾ? ನನ್ನ ಕಾರ್ ಒರೆಸ್ತೀಯಾ? ನನ್ನದೊಂದು ಒಳ್ಳೇ ಫೋಟೋ ತೆಗೀತೀಯಾ, ನನ್ನ ಪರವಾಗಿ ಕೋರ್ಟಲ್ಲಿ ಲಾಯರಾಗಿ ವಾದ ಮಾಡ್ತೀಯಾ ಅಥವಾ ನನ್ನ ಗಾಲ್ಬ್ಲಾಡರ್ ತೆಗೆಯೋ ಡಾಕ್ಟರಾ ನೀನು-ಇಂಥ ಫ..ಂಗ್ ಗುರುಪ್ರಸಾದ್ ಕಾಗಿನೆಲೆhttp://www.blogger.com/profile/09170176987375124115noreply@blogger.com1tag:blogger.com,1999:blog-8587091370010938148.post-59287677913374316762009-10-21T09:12:00.002-05:002009-10-21T09:17:01.233-05:00ಕೆಂಡಸಂಪಿಗೆಯ ಮರಣಅಂತರ್ಜಾಲದ ಕನ್ನಡದ ತಾಣ ಕೆಂಡಸಂಪಿಗೆ ಅಕಾಲಿಕ ಮರಣವನ್ನಪ್ಪಿದೆ. ಇದ್ದಕ್ಕಿದ್ದಂತೆ ಈ ತಿಂಗಳ ಮೊದಲ ದಿನದಂದು ‘ಇನ್ನುಮುಂದೆ ಕೆಂಡಸಂಪಿಗೆ ಯ ಪ್ರಕಟಣೆಯನ್ನು ನಿಲ್ಲಿಸಿದ್ದೇವೆ, ಇದುವರೆವಿಗೂ ನಮ್ಮೊಂದಿಗೆ ಸಹಕರಿಸಿದ ಎಲ್ಲ ಬರಹಗಾರರಿಗೆ ಮತ್ತು ಓದುಗವರ್ಗಕ್ಕೆ ಧನ್ಯವಾದಗಳು’ ಎಂಬ ಒಂದು ಸಾಲಿನ ಓಬಿಚುಯರಿಯೊಂದಿಗೆ ಕೆಂಡಸಂಪಿಗೆ ತನ್ನ ಅಂತರ್ಜಾಲ ತಾಣವನ್ನು ಶಾಶ್ವತವಾಗಿ ಮುಚ್ಚಿದೆ. ಇನ್ನುಮುಂದೆ ದಿನಂಪ್ರತಿ ಈ ತಾಣವನ್ನು ನೋಡಹೋಗುತ್ತಿದ್ದ ಜಾಲತಾಣಿಗರಿಗೆಲ್ಲ ಏನೋ ಕಳಕೊಂಡ ಇರುಸುಮುರುಸು. ಗುರುಪ್ರಸಾದ್ ಕಾಗಿನೆಲೆhttp://www.blogger.com/profile/09170176987375124115noreply@blogger.com2tag:blogger.com,1999:blog-8587091370010938148.post-79349487530717413732009-10-14T18:16:00.001-05:002009-10-14T18:17:38.233-05:00ಅಧಿಕಾರ- ಅಂತರ ಮಾಪಕ೧೯೯೦ ರ ಜನವರಿ ತಿಂಗಳಲ್ಲಿ ಕೆರಿಬಿಯನ್ನ ‘ಏವಿಯಂಕ ಏರ್ಲೈನ್’ನ ವಿಮಾನವೊಂದು ನ್ಯೂಯಾರ್ಕಿನ ಲಾಂಗ್ ಐಲ್ಯಾಂಡಿನ ಬಳಿ ಒಂದು ಎಸ್ಟೇಟಿನ ಬಳಿ ಅಪಘಾತಕ್ಕೀಡಾಗಿತ್ತು. ಕಾರಣ ಬಹಳ ಸರಳವಾಗಿತ್ತು-ವಿಮಾನದಲ್ಲಿ ಇಂಧನ ಮುಗಿದುಹೋಗಿತ್ತಂತೆ. ಅಂದು ನ್ಯೂಯಾರ್ಕಿನ ಜಾನ್ ಎಫ್ ಕೆನಡಿ ವಿಮಾನನಿಲ್ದಾಣದಲ್ಲಿ ಕೆಟ್ಟ ಹವೆ, ವಿಪರೀತ ವಿಮಾನಜಂಗುಳಿ ಮತ್ತು ರನ್ವೇ ಅಭಾವದಿಂದ ಬಹಳಷ್ಟು ವಿಮಾನಗಳನ್ನು ಸರಿಯಾದ ಸಮಯದಲ್ಲಿ ಇಳಿಸಲಾಗಲಿಲ್ಲ. ಬಹಳಷ್ಟು ವಿಮಾನಗಳು ಗಾಳಿಯಲ್ಲಿ ಹಾರಾಡುತ್ತಾ ತಮ್ಮ ಸರದಿಗಾಗಿ ಗುರುಪ್ರಸಾದ್ ಕಾಗಿನೆಲೆhttp://www.blogger.com/profile/09170176987375124115noreply@blogger.com2tag:blogger.com,1999:blog-8587091370010938148.post-14182100245932346652009-09-20T09:51:00.000-05:002009-09-20T09:52:08.000-05:00ಹಿಂಸೆಯೆಂಬ ಕಂಡಿಶನ್ಡ್ ರಿಫ್ಲೆಕ್ಸೂ, ತೆನಾಲಿರಾಮನ ಬೆಕ್ಕೂಈ ಜಗತ್ತಿನಲ್ಲಿ ಕೆಟ್ಟದು ಅನ್ನುವುದಿಲ್ಲದಿದ್ದರೆ ಒಳ್ಳೆಯದಕ್ಕೆ ಬೆಲೆ ಬರುತ್ತಿತ್ತಾ? ಒಳ್ಳೆಯದು, ಕೆಟ್ಟದ್ದು ಅನ್ನುವ ಬೈನರಿ ನಿಯಮ ಈ ಪ್ರಪಂಚದಲ್ಲಿ ಇರಲೇಬೇಕು. ಆಗಲೇ ಒಳ್ಳೆಯದು ಒಳ್ಳೆಯದಾಗುವುದು. ಒಂದು ಕ್ರಿಯೆ ‘ಕೆಟ್ಟದ್ದು’ ಅನ್ನುವುದು ಗೊತ್ತಿದ್ದರೂ ಕೆಲವರು ಅದನ್ನು ತಮ್ಮ ಪ್ರವೃತ್ತಿಯಾಗಿ ಆಯ್ದುಕೊಳ್ಳುತ್ತಾರಲ್ಲ. ಅದನ್ನು ನಾವು ಒಪ್ಪಿಕೊಳ್ಳುವುದು ಹೇಗೆ?ಒಳ್ಳೆಯದು ಕೆಟ್ಟದ್ದು ಎನ್ನುವ ನೈತಿಕ ಧ್ರುವಗಳನ್ನು ನಮಗೆ ಹೊರೆಸಬೇಕಾಗಿರುವುದು ಯಾರು? ನಮ್ಮ ಸಮಾಜವೇ? ನಮ್ಮ ಒಳಗಿನ ಗುರುಪ್ರಸಾದ್ ಕಾಗಿನೆಲೆhttp://www.blogger.com/profile/09170176987375124115noreply@blogger.com2tag:blogger.com,1999:blog-8587091370010938148.post-91577471563491152172009-09-06T10:03:00.000-05:002009-09-06T10:04:28.817-05:00ಮಲ್ಟಿಪ್ಲೆಕ್ಸ್ ಎಂಬ ನಂಬುಗಸ್ತ ಕಲ್ಟ್ಗಾಗಿ ಧನ್ ಟ ಣಾ.."ದೊಡ್ದ ಪರದೆಯಲ್ಲಿ ಒಂದು ರೇಸ್ ಅಂಕಣ. ಆ ಪ್ರೇಕ್ಷಕರ ಗ್ಯಾಲರಿಯಲ್ಲಿ ಸುಂದರವಾದ ಹುಡುಗಿಯೊಬ್ಬಳ ಮೇಲೆ ನಿಧಾನವಾಗಿ ಕ್ಯಾಮೆರಾ ನಿಲ್ಲುತ್ತದೆ. ಹಿಂದಿನಿಂದ ಗಾಯವಾದ ತೋಳಿಗೊಂದು ಸ್ಲಿಂಗ್ ಹಾಕಿಕೊಂಡಿರುವ ಉದ್ದಕೂದಲಿನ ಶಾಹಿದ್ ಕಪೂರ್ ನಿಧಾನವಾಗಿ ಬಂದು "ಬ್ಲೂ ಥಂಡರ್" ಎನ್ನುತ್ತಾನೆ. ಆಕೆ, ಸುಮ್ಮನೆ ಮಾದಕವಾಗಿ ನಗುತ್ತಾಳೆ. ಆಗ ಗಾಳಿಯಲ್ಲಿ ಒಂದು ನೋಟು ಹಾರಿಕೊಂಡು ಬರುತ್ತದೆ. ಅದನ್ನು ಹಿಂಬಾಲಿಸಿಕೊಂಡು ಹೋಗಿತ್ತಾನೆ. ನಿಧಾನವಾಗಿ ಆ ದೃಶ್ಯ ಇನ್ನೊಂದು ದೃಶ್ಯದೊಂದಿಗೆ ಲೀನವಾಗುತ್ತದೆ. ಅಲ್ಲಿಗುರುಪ್ರಸಾದ್ ಕಾಗಿನೆಲೆhttp://www.blogger.com/profile/09170176987375124115noreply@blogger.com2tag:blogger.com,1999:blog-8587091370010938148.post-51644592709706703602009-08-07T16:32:00.000-05:002009-08-07T16:34:21.607-05:00ಪಂಡಿತ ಪಾಮರರ ನಡುವಿನ ತೂಗು ಸೇತುವೆನಮ್ಮ ಸೃಜನಶೀಲ ಸಂವೇದನೆಗಳನ್ನು ಹುಟ್ಟಿಸುವುದು ಯಾವುದು? ಬೆಳೆಸುವುದು ಯಾವುದು. ಈ ಸಂವೇದನೆಗಳ ಹುಟ್ಟಿಗೂ ಬೆಳವಣಿಗೆಗೂ ಒಂದು ಸಾವಯವ ಸಂಬಂಧವಿದೆಯಾ? ಈ ಹುಟ್ಟು ಮತ್ತು ಬೆಳವಣಿಗೆ ಒಂದು ಪ್ರಯತ್ನಪೂರ್ವಕ ಕ್ರಿಯೆಯಾ? ಪ್ರಯತ್ನಪೂರ್ವಕವಾಗಿ ಬೆಳೆಸಿಕೊಳ್ಳುವುದು "ಸೃಜನ" ಹೇಗೆ ಆಗುತ್ತದೆ. ಹುಟ್ಟಾ ಯಾರೂ ಸಾಹಿತಿಯಾಗುವುದಿಲ್ಲ. ಆದರೆ, ಈ ಬರೆಯುವ ಗೀಳು ಹೇಗೋ ಶುರುವಾಗುತ್ತದೆ. "ಪೂರ್ತಿಯೊಣಗದ ಚಡ್ಡಿ ಹಸಿಹಸಿಸಿಕ್ಕಿಸಿಕೊಂಡು ಬೂರಸು ಕೊಡೆಯೆತ್ತಿಜುಳುಜುಳು ಕೆಸರು ತಂಪುಪಾದ॒ಹೆಗಲಿಗಂಟಿದ ಗುರುಪ್ರಸಾದ್ ಕಾಗಿನೆಲೆhttp://www.blogger.com/profile/09170176987375124115noreply@blogger.com2tag:blogger.com,1999:blog-8587091370010938148.post-74356457948512283782009-07-25T13:06:00.000-05:002009-07-25T13:07:35.774-05:00ನಾನು, ನೀನು ಮತ್ತು ಅವನುಒಂದು ಕತೆ ಬರೆಯುವಾಗ ಅಥವಾ ಓದುವಾಗ, ಕತೆ ಹೇಳುತ್ತಿರುವ ನಿರೂಪಕ ಯಾರು ಎಂಬುದು ನಮಗೆ ಮುಖ್ಯವಾಗುತ್ತದಾ? ಮುಖ್ಯವಾಗಬೇಕಾ? ನಾನು ಹೇಳುತ್ತಿರುವುದು ಕತೆಗಾರನಲ್ಲ, ಬರೆಯುವ ವ್ಯಕ್ತಿಯ ಹೆಸರೂ ಅಲ್ಲ. ಕತೆಯನ್ನು ಉತ್ತಮ ಅಥವಾ ಪ್ರಥಮ ಪುರುಷದಲ್ಲಿ ಬರೆಯುವುದು, ಬರೆದುದನ್ನು ಅರ್ಥಮಾಡಿಕೊಳ್ಳುವುದು ಎಷ್ಟು ಮುಖ್ಯ?ಬಹಳ ಕತೆ, ಕಾದಂಬರಿಗಳು ಪ್ರಥಮ ಅಥವಾ ಉತ್ತಮ ಪುರುಷದಲ್ಲಿ ಬರೆಯಲ್ಪಟ್ಟಿರುತ್ತವೆ, ನಿರೂಪಿಸಲ್ಪಟ್ಟಿರುತ್ತವೆ. ಪ್ರಥಮ ಪುರುಷದಲ್ಲಿ ಬರೆದ ಕತೆಗಳು ಮುಖ್ಯವಾಗಿ ಲೇಖಕನಿಗೆ ಗುರುಪ್ರಸಾದ್ ಕಾಗಿನೆಲೆhttp://www.blogger.com/profile/09170176987375124115noreply@blogger.com2tag:blogger.com,1999:blog-8587091370010938148.post-46581772051190776702009-07-11T00:23:00.000-05:002009-07-11T00:24:37.506-05:00ಸಾಹಿತ್ಯವೆಂಬ ಚಪ್ಪೆಹುಳುಪ್ರತಿಯೊಬ್ಬ ಬರಹಗಾರನೂ ಒಂದಲ್ಲ ಒಂದು ಬಾರಿ ಈ ಪ್ರಶ್ನೆಗೆ ಉತ್ತರಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ನಾನೇಕೆ ಬರೆಯುತ್ತೇನೆ? ಬರೆಯುವುದರಿಂದ ನನಗಾಗುವ ಲಾಭವೇನು? ಬರೆಯದೇ ಇದ್ದರೆ ನಷ್ಟವೇನು. ಬರಹವೆನ್ನುವುದು ಚಟವಾ, ಪ್ರೀತಿಯಾ. ಹಣಕ್ಕಾಗಿಯಾ? ಖ್ಯಾತಿ, ಪ್ರಶಸ್ತಿಗಳಿಗಾಗಿಯಾ.ನಾವು ಒಬ್ಬೊಬ್ಬರೂ ಒಂದೊಂದು ಉತ್ತರವನ್ನು ಕೊಡಬಹುದು. ಆದರೆ, ಬರೆಯುವ ಪ್ರತಿಯೊಬ್ಬರಿಗೂ ಗೊತ್ತು, ತಾವು ಬರೆಯುವುದು ತಮ್ಮ ಬರವಣಿಗೆಯ ಮೇಲಿನ ಪ್ರೀತಿಗಾಗಿ. ಕೇವಲ ಪ್ರೀತಿಯಿಂದ ಮಾತ್ರ ಎಂತದೂ ಗುರುಪ್ರಸಾದ್ ಕಾಗಿನೆಲೆhttp://www.blogger.com/profile/09170176987375124115noreply@blogger.com4tag:blogger.com,1999:blog-8587091370010938148.post-74797986805169635952009-06-28T21:27:00.001-05:002009-07-07T22:59:53.632-05:00ಕಾವ್ಯನಾಮಗಳ ಕಾರ್ಯಕಾರಣಒಬ್ಬ ವ್ಯಕ್ತಿ ಕಾವ್ಯನಾಮದಿಂದ ಯಾಕೆ ಬರೆಯುತ್ತಾನೆ? ಮಾಸ್ತಿ ಶ್ರೀನಿವಾಸ ಏಕೆ ಆಗುತ್ತಾರೆ? ಅಂಬಿಕಾತನಯದತ್ತ, ಕಾವ್ಯಾನಂದ, ಮುದ್ದಣ, ಚದುರಂಗ, ಎಂಬ ಹೆಸರುಗಳು ಆಯಾ ವ್ಯಕ್ತಿಗಳ ನಿಜವಾದ ಹೆಸರುಗಳ ಅಸ್ತಿತ್ವದ ಜತೆಗೂ ಯಾಕೆ ಪ್ರಚಲಿತವಾಗಿರುತ್ತದೆ? ಎರಿಕ್ ಬ್ಲೇರ್ ಯಾಕೆ ಜಾರ್ಜ್ ಆರ್ವೆಲ್ ಆಗುತ್ತಾನೆ? ಜಾನಕಿ ವೈದೇಹಿ ಯಾಕೆ ಆಗುತಾರೆ? ತಮ್ಮ ಹುಟ್ಟುಹೆಸರುಗಳ ಜತೆಜತೆಗೂ ಕಾವ್ಯನಾಮಗಳೂ ಉಳಿದುಕೊಳ್ಳುವುದು ಹೇಗೆ?ಈ ಕಾವ್ಯನಾಮ ಅನ್ನುವುದು ಮೇಲುನೋಟಕ್ಕೆ ವ್ಯಾವಹಾರಿಕ ಅಥವಾ ಕಾರ್ಯಕಾರಣ ಗುರುಪ್ರಸಾದ್ ಕಾಗಿನೆಲೆhttp://www.blogger.com/profile/09170176987375124115noreply@blogger.com3tag:blogger.com,1999:blog-8587091370010938148.post-75799603823960046442009-06-13T08:16:00.000-05:002009-06-13T08:17:34.874-05:00ಕೇವಲ ಬರಹಗಾರಶಾಂತಾರಾಮ್ ಎನ್ನುವ ಬೃಹತ್ ಕಾದಂಬರಿ ಬರೆದ ಗ್ರೆಗರಿ ಡೇವಿಡ್ ರಾಬರ್ಟ್ಸ್ ಆ ಕಾದಂಬರಿಯ ಶುರುವಿನಲ್ಲಿ ಬರೆಯುತ್ತಾನೆ. ‘ನಾನೊಬ್ಬ ಹುಟ್ಟು ಬರಹಗಾರ. ಕೇವಲ ರಹಗಾರ. ಎಂಥ ವಿಷಮ ಪರಿಸ್ಥಿಯಲ್ಲಿಯೂ ನಾನು ಬರೆಯುತ್ತಲೇ ಇದ್ದೆ. ಜೈಲಿನಲ್ಲಿರಲಿ, ಜೈಲಿನಿಂದ ತಪ್ಪಿಸಿಕೊಳ್ಳುವಾಗಲಿರಲಿ, ಅಥವಾ ಲಿಯೊಪೊಲ್ಡ್ ಕೆಫೆಯಲ್ಲಿ ಕೂತು ಮಾಫಿಯಾದವರೊಂದಿಗೆ ವ್ಯವಹಾರ ಕುದುರಿಸುತ್ತಿರಲಿ, ಯಾರನ್ನಾದರೂ ಹೇಗೆ ಮುಗಿಸಬೇಕೆಂದು ಪ್ಲಾನ್ ಮಾಡುತ್ತಿರಲಿ, ನಾನು ಬರೆಯುತ್ತಲೇ ಇರುತ್ತಿದ್ದೆ. ರೆಸ್ಟುರೆಂಟಿನಲ್ಲಿಡುವ ಗುರುಪ್ರಸಾದ್ ಕಾಗಿನೆಲೆhttp://www.blogger.com/profile/09170176987375124115noreply@blogger.com3tag:blogger.com,1999:blog-8587091370010938148.post-41700647068369561912009-06-02T21:58:00.001-05:002009-06-02T23:30:33.846-05:00ನೈಸ್ ಕತೆಗಾರರ ತಳಿಸಾಹಿತ್ಯವನ್ನು ಅಕೆಡಿಮಿಕ್ ಆಗಿ ಓದದ, ಆದರೆ ಕೇವಲ ಆಸಕ್ತಿಯಿಂದ ಮಾತ್ರ ಸಾಹಿತ್ಯವನ್ನು ಓದಿ ಕತೆಗಳನ್ನು ಬರೀತಿರೋರ ಗುಂಪು ಅಧಿಕವಾಗುತ್ತಾ ಇರುವ ಈ ಕಾಲದಲ್ಲಿ ಕತೆಗಾರನಿಗೆ ಸಾಹಿತ್ಯವನ್ನು ಮತ್ತು ತನ್ನ ಪರಂಪರೆಯನ್ನು ಓದುವ ಜವಾಬ್ದಾರಿ ಎಷ್ಟಿರಬೇಕು? ನಮ್ಮನ್ನು ಯಾರ ಪರಂಪರೆಗೂ ಸೇರಿಸಬೇಡಿ ನಮ್ಮ ಪಾಡಿಗೆ ಬಿಟ್ಟುಬಿಡಿ ಎಂದು ಪರಿಪರಿಯಾಗಿ ಎಷ್ಟೇ ಕೇಳಿಕೊಂಡರೂ ಈ ಕನ್ನಡದಲ್ಲಿ ಬರೆಯುವ ಕ್ರಿಯೆಯೇ ಇವರನ್ನು ಒಂದು ಪರಂಪರೆಗೆ ಸೇರಿಸಿಬಿಟ್ಟಿದೆ. ಈ ಪರಂಪರೆ ಇಲ್ಲಿಂದಲೇ ಸುರುವಾಯಿತು ಎಂದು ಗುರುಪ್ರಸಾದ್ ಕಾಗಿನೆಲೆhttp://www.blogger.com/profile/09170176987375124115noreply@blogger.com5tag:blogger.com,1999:blog-8587091370010938148.post-89779760168740602492009-05-19T21:07:00.000-05:002009-05-19T21:19:02.718-05:00ಸಾಹಿತಿಗಳ ಚಿತ್ರಮನೆಯ ಹಿಂದಿನ ಡೆಕ್ಕಿನ ಮೇಲೆ ನಿಲ್ಲುತ್ತೇನೆ. ಈ ಶರಟು ಸರಿಯಿಲ್ಲ, ಬದಲಿಸಿಕೊಂಡು ಬಾ ಎನ್ನುತ್ತಾಳೆ, ಮಗಳು. ಪುಸ್ತಕದ ಹಿಂಬದಿಯ ಹೊದಿಕೆಯ ಮೇಲೆ ಇರುವ ಚಿತ್ರವಾದರೆ ಅದು ಚೆನ್ನಾಗಿರಬೇಕು. ಯಾವುದೋ ಸಾಪ್ತಾಹಿಕಕ್ಕಲ್ಲವಾ, ಒಂದು ದಿನ ಇರೋದು ತಾನೇ. ಅದಕ್ಕೆ ಇಷ್ಟೊಂದು ಕಷ್ಟಯಾಕೆ?, ಬೇಗ ಮುಗಿಸಿ ಎಂದು ಹೆಂಡತಿ ಅವಸರ ಮಾಡುತ್ತಾಳೆ. ಬಕ್ಕತಲೆಯವರಿಗೆ ಪ್ರೊಫೈಲೇ ಚಂದ ಎಂದು ಮಗಳು ನಿಧಾನವಾಗಿ ಈಕಡೆ ತಿರುಗಿಸಿ ನಿಲ್ಲಿಸುತ್ತಾಳೆ. ಹೊರಗೆ ಬಿಸಿಲು ಚೆನ್ನಾಗಿದೆ. ಒಂದು ನಾಲ್ಕು ಐದು ಬೇರೆಬೇರೆ ಗುರುಪ್ರಸಾದ್ ಕಾಗಿನೆಲೆhttp://www.blogger.com/profile/09170176987375124115noreply@blogger.com1tag:blogger.com,1999:blog-8587091370010938148.post-60340146997377382402009-05-04T16:54:00.000-05:002009-05-04T17:09:10.451-05:00ಎಬಿಸಿಡಿ ಮತ್ತು ಎನ್ನಾರೈ೧. ಆತ ಅಮೆರಿಕಾದಲ್ಲಿಯೇ ಹುಟ್ಟಿದ್ದು ಮತ್ತು ಬೆಳೆದಿರುವುದು, ಹುಟ್ಟಿದಂದಿನಿಂದ ಭಾರತಕ್ಕೆ ಬಂದಿಲ್ಲ. ಅಜ್ಜಿ ಕೂಡ ಅಮೆರಿಕಾದಲ್ಲಿ ಇವನ ಕುಟುಂಬದ ಜತೆಗೇ ಇದ್ದಾಳೆ. ಆಕೆಗೆ ಮಾರಣಾಂತಿಕ ಕಾಯಿಲೆ. ಆದರೆ, ಅವಳು ಅಮೆರಿಕಾದಲ್ಲಿ ಸಾಯಲು ಸಿದ್ಧಳಿಲ್ಲ. ಅವಳನ್ನು ಮತ್ತೆ ವಾಪಸ್ಸು ಭಾರತಕ್ಕೆ ಬಿಟ್ಟುರುವ ನೆವದಲ್ಲಿ ಭಾರತಕ್ಕೆ ಹೋಗುತ್ತಾನೆ. ಅಲ್ಲಿ ಆತ ಬಂದಿಳಿಯುವುದು ದೆಹಲಿ-೬ (ಚಾಂದನೀ ಚೌಕ)ಕ್ಕೆ. ಅಲ್ಲಿ ಆತ ‘ಚಾಳ್’ ನ ಜನಗಳ ಸಂಬಂಧ, ಪ್ರೀತಿ, ದ್ವೇಷ, ರಗಳೆಗಳನ್ನು ನೋಡಿ ಪುಳಕಗೊಳ್ಳುತ್ತಾನೆ.ಗುರುಪ್ರಸಾದ್ ಕಾಗಿನೆಲೆhttp://www.blogger.com/profile/09170176987375124115noreply@blogger.com1tag:blogger.com,1999:blog-8587091370010938148.post-24448097299203865252009-04-21T20:09:00.000-05:002009-04-21T20:20:53.323-05:00ಕಾದಂಬರಿ ಬರೆಯುವುದು ಎಂದರೆಕಾದಂಬರಿ ಒಂದು ನೀಳ್ಗತೆಯಲ್ಲ. ಕಾದಂಬರಿಕಾರನಿಗೆ ಬದುಕಿನ ಬಗ್ಗೆ ಒಂದು ವಿಶಾಲವಾದ ನೋಟವಿರಬೇಕು, ಪಾತ್ರಗಳ ಜತೆಗೆ ದಿನಗಟ್ಟಲೆ, ತಿಂಗಳುಗಟ್ಟಲೆ ಕೆಲವೊಮ್ಮ ವರ್ಷಗಟ್ಟಲೆ ಬದುಕುವ ಸಾವಧಾನವಿರಬೇಕು. ಪ್ರತಿಪಾತ್ರಗಳ ನೋವನ್ನೂ ಖುಷಿಯನ್ನೂ, ಹುರುಪನ್ನೂ, ಮುಗ್ಧತೆಯನ್ನೂ ಹಾಗೆಯೇ ತಳಮಳವನ್ನೂ ಅನುಭವಿಸುವ ಶಕ್ತಿಯಿದ್ದವನಾಗಿರಬೇಕು. ಕಾದಂಬರಿಕಾರ ಎಲ್ಲಿಯೂ ಮೂಗುತೂರಿಸದೇ ಪಾತ್ರಗಳನ್ನು ಅವಾಗಿಯೇ ಬೆಳೆಯಲು ಬಿಟ್ಟರೆ ಪಾತ್ರಗಳು ಅವೇ ದೊಡ್ಡದಾಗಿ ಕಾದಂಬರಿಕಾರನನ್ನೂ ಮೀರಿ ಬೆಳೆಯುತ್ತವೆ. ಅವನ ಗುರುಪ್ರಸಾದ್ ಕಾಗಿನೆಲೆhttp://www.blogger.com/profile/09170176987375124115noreply@blogger.com1tag:blogger.com,1999:blog-8587091370010938148.post-32116298410387286752009-04-04T20:36:00.000-05:002009-04-04T20:46:39.836-05:00ಭರಿಸಲಾಗದ ಇರವಿನ ಹಗುರ‘ನಮ್ಮ ವಿಜ್ಞಾನ, ಕಲೆಯಾಗಲೀ ಅಥವಾ ತತ್ವಶಾಸ್ತ್ರದಂತಹ ಮಾನವಿಕ ಶಾಸ್ತ್ರಗಳಾಗಲೀ ಮಾನವನ ಕೂಸಾಗಿಯೇ ಹುಟ್ಟಿದರೂ ಭಸ್ಮಾಸುರನಂತೆ ಅವನನ್ನು ಮೀರಿ ಬೆಳೆದಿವೆ. ವಿಪರ್ಯಾಸವೆಂದರೆ ಈ ವಿಷಯಗಳನ್ನು ಮನುಷ್ಯ ಹೆಚ್ಚುಹೆಚ್ಚು ಅರ್ಥಮಾಡಿಕೊಂಡಷ್ಟೂ ಪ್ರಪಂಚವನ್ನು ಮತ್ತು ತನ್ನನ್ನು ಸ್ಪಷ್ಟವಾಗಿ ಅರಿತುಕೊಳ್ಳ್ಳಲಾಗುತ್ತಿಲ್ಲ. ಅಷ್ಟೇ ಅಲ್ಲ, ಆಧುನಿಕ ಮನುಷ್ಯ ಚರಿತ್ರೆ, ವಿಜ್ಞಾನ, ರಾಜಕೀಯ ಮತ್ತು ತಂತ್ರಜ್ಞಾನದ ಶಕ್ತಿ ಬೆಳೆದಂತೆಲ್ಲಾ ಅವುಗಳ ಮೇಲೆ ತನ್ನ ನಿಯಂತ್ರಣವನ್ನು ಕಳಕೊಂಡಿದ್ದಾನೆ. ಎಲ್ಲವಕ್ಕೂ ಗುರುಪ್ರಸಾದ್ ಕಾಗಿನೆಲೆhttp://www.blogger.com/profile/09170176987375124115noreply@blogger.com0tag:blogger.com,1999:blog-8587091370010938148.post-7205734480641079022009-03-21T14:19:00.000-05:002009-03-21T14:22:29.505-05:00ಒಬಾಮಾ ಎಂಬ ದೊಡ್ಡ ಬಜೆಟ್ ಚಿತ್ರ.ನವೆಂಬರ್ ಆರು, ೨೦೦೮ರಂದು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದೆ. ಹಿಂದಿನ ದಿನವಷ್ಟೇ ಅಮೆರಿಕಾದ ಚುನಾವಣಾ ಫಲಿತಾಂಶ ಹೊರಬಿದ್ದಿತ್ತು. ಬರಾಕ್ ಹುಸೇನ್ ಒಬಾಮ ತನ್ನ ಪ್ರತಿಸ್ಪರ್ಧಿ ಮೆಕೇನನ್ನು ಭಾರಿ ಅಂತರದಿಂದ ಸೋಲಿಸಿದ್ದ. ಶಿಕಾಗೋದ ಗ್ರಾಂಟ್ ಪಾರ್ಕಿನಲ್ಲಿ ಎರಡೂವರೆಲಕ್ಷ ಜನರ ಮುಂದೆ ತನ್ನ ವಿಜಯವನ್ನು ಸಂಭ್ರಮಿಸಿದ್ದ. ಹೆಂಡತಿ ಮಿಶೇಲ್ ಮತ್ತು ಮಕ್ಕಳಾದ ಮಲಿಯ ಮತ್ತು ತಾಶಾರ ಜತೆಗೆ ವೇದಿಕೆಯಮೇಲೆ ಓಡಿಯಾಡಿ ಖುಷಿಪಟ್ಟಿದ್ದ. ಅತ್ತ ಫೀನಿಕ್ಸಿನಲ್ಲಿ ಜಾನ್ ಮಕೇನ್ ವೀರೋಚಿತವಾಗಿ ತನ್ನ ಗುರುಪ್ರಸಾದ್ ಕಾಗಿನೆಲೆhttp://www.blogger.com/profile/09170176987375124115noreply@blogger.com0